Friday 24 July 2015

ಸಂಕಲನ..!!

ಸಂಕಲನ..!!

ಬರೆಯಲೇನು?

ಹುಡುಗಾ
ನೀನಿರದ
ಜಗದಲ್ಲಿ
ಬದುಕಲು
ಕಾರಣವೇನಿದೆ
ನನಗೆ..
ನಿನ್ನುಸಿರ
ಗಾಳಿಯನ್ನಾದರೂ
ಬಿಟ್ಟು
ಹೋಗು
ಬದುಕಬೇಕಿದೆ
ಬದುಕ
ಮುಸ್ಸಂಜೆಯವರೆಗಾದರು
ಕೊನೆಗೆ...      
                                            
-ಪುನರ್ವಸು ವಸು

ನಟ್ಟ ನಡುರಾತ್ರಿಯಲಿ                                                      
ಕತ್ತಲ ಕೋಣೆಯಲ್ಲಿ
ಕುಳಿತು ಒಬ್ಬಂಟಿಯಾಗಿ
ಕಣ್ಣ ಕದಲಿಸುತ್ತಿರುವೆ
ಕೆನ್ನೆಯ  ಮೇಲೆ
ಕಂಬನಿಯು ಜಾರುತ್ತಿವೆ
ಯೋಚಿಸುತ್ತಿರುವೆ.....
ನನ್ನೆದೆಯೊಳಗಿನ  ಭಾವಕ್ಕೆ
ರೂಪವೊಂದ ಕೊಡುವುದಾದರೆ...
ಕಥೆ ಬರೆಯಲೇ, ಕವನ ಗೀಚಲೇ
ತಿಳಿಯದಾಗಿದೆ.
             -ಮೇಘ  

ಮಾತುಗಳ ಮಿಲನ
ಸ್ವರಗಳ ಸಮ್ಮಿಲನ
ಭಾವನೆಗಳ ಆಶಾ ಕಿರಣ
ಅದುವೇ ನನ್ನ ಒಲವಿನ ಆಮಂತ್ರಣ
ಮಾತು ಕಥೆಗೆ ಮುಖ್ಯ ಕಾರಣ
ಪ್ರೀತಿ ವಿಶ್ವಾಸದ ಸಂದೇಶದ ಹೊರಣ
ಸವಿ ನೆನಪಿನ ತಳಿರು ತೋರಣ
ಮರೆತರೂ ಮರೆಯದ ಭಾಂದವ್ಯದ
 ಒಲವಿನ ಕಿರಣ ಅದುವೇ
ನಮ್ಮ ನಿಮ್ಮ ಸ್ನೇಹದ
ಭವ್ಯವಾದ ಪಯಣ

                -ಸುನೀಲ ಡೊಳ್ಳಿನ


ಕಾಣದ ಕರೆಯೊಂದು
ಸರಿಸಿತು ತೆರೆಯ ಮರೆಗೆ...
ಮರೆಯದೆ ಉಳಿಸಿ 
ಸುಮಧುರ ನೆನಪುಗಳ
ನಾ ಬರುವವರಗೆ
ಬಾನಲ್ಲಿ
ಬೆಳದಿಂಗಳಾಗಿ ಅಲ್ಲಿಯವರೆಗೊ
ಎತ್ತಿಟ್ಟುಕೊಂಡಿರು

ಎನ್ನ ನೆನಪುಗಳ ಅಲ್ಲಿಯವರೆಗೊ. .!!
                        
                           -ಟಿ ನ್ ಜಗ
                                        
ನಿನ್ನ
ಮೇಲೆ
ಕವಿತೆ
ಗೀಚಿದ್ದು
ತಪೇನು
ಅಲ್ಲೆವಲ್ಲ...?

ಹಾಳೆಯ
ಮೇಲಾದರೂ
ದೂರವಾದ
ಎಷ್ಟೋ
ಶಬ್ದಗಳು
ಸೇರಿ
ಒಂದಾಗುತಿವೆ....
          -ಸಂತೋಷ್ ಎಸ್ ಕೆ

ಕಲ್ಪನೆಯ ಕಡಲು ಬತ್ತಿದೆ .
ಭಾವನೆಗಳ ಬರೆಯಲು ಸ್ಥಳವಿಲ್ಲ
ವಾಸ್ತವತೆಯ ಒಡಲು ತುಂಬಿದೆ.
ಕಾರಣಗಳ ತಿಳಿಯಲು ಮನಸಿಲ್ಲ.
ಕತ್ತಲೆಯಲ್ಲಿ ಕನಸ್ಸುಗಳು ಹುಟ್ಟಿದೆ
ಹಿಂಬಾಲಿಸುವ ಮಾರ್ಗವ ಕಂಡಿಲ್ಲ
ನಗು ಮೊಗದ ಹೊಳಪು ಮಾಸಿದೆ
ಬಣ್ಣಗಳನ್ನು ಹಚ್ಚಲು ತಿಳಿದಿಲ್ಲ
ಕರೆದಂಥ ನಿನ್ನ ಹೆಸರ ಸುಳಿವಿದೆ
ಮತ್ತೊಮ್ಮೆ ಕರೆಯಲು ನೆನಪಿಲ್ಲ.    
                        -ನಿನ್ನವ ಮನು 





   

No comments:

Post a Comment